Sunday, June 14, 2009

ನಂದಿನಿ ನದಿ



ಕಟೀಲಿನ ನಂದಿನೀ ನದಿ ಕ್ಷೇತ್ರದ ಆಕರ್ಷಣೆಗಳಲ್ಲೊಂದು.
ಕಾಮಧೇನುವಿನ ಮಗಳು ನಂದಿನೀಯನ್ನು ಬರಗಾಲ ನಿವಾರಣೆಗೆ ಇಳೆಗೆ ಬರಲು ಕೇಳಿಕೊಂಡಾಗ ಆಕೆ ಒಪ್ಪಲಿಲ್ಲವೆಂದು ಮುನಿ ಜಾಬಾಲಿಯಿಂದ ಶಾಪಿತಳಾಗಿ ಮಾಘಶುದ್ಧ ಪೌರ್ಣಮಿಯ ದಿನ ನಂದಿನಿ ನದಿಯಾಗಿ ಹರಿದಳು. ಕನಕಾದ್ರಿಯಲ್ಲಿ(ಈಗಿನ ಮಿಜಾರು) ಹುಟ್ಟಿ ಪಡುಗಡಲು ಸೇರುವ ನಂದಿನಿಯ ಕಟಿ ಪ್ರದೇಶದಲ್ಲಿ ದುರ್ಗಾಮಾತೆಯು ಲಿಂಗ ರೂಪದಲ್ಲಿ ಆವಿರ್ಭವಿಸಿದ ಪರಿಣಾಮ ಈ ಕ್ಷೇತ್ರ ಕಟೀಲು ಆಯಿತು.
ಇಂಥಾ ನಂದಿನಿಯ ಹೊಳೆ ಹುಟ್ಟಿ ಹರಿದು ಸಮುದ್ರ ಸೇರುವ ಮಧ್ಯ ಭಾಗದಲ್ಲಿ ಕಟೀಲು ಬರುತ್ತದೆ. ಸುಮಾರು 32ಕೀಮೀ ಎಂಬುದು ಒಂದು ಲೆಕ್ಕಾಚಾರ. ಮುಚ್ಚೂರು, ಮಚ್ಚಾರು, ಅಜಾರು, ಕಟೀಲು, ಎಕ್ಕಾರು, ಶಿಬರೂರು, ಪುಚ್ಚಾಡಿ, ಚೇಳಾಯರು, ಪಾವಂಜೆ ಹೀಗೆ ಹನ್ನೆರಡಕ್ಕೂ ಹೆಚ್ಚು ಕಡೆ ಈ ಹೊಳೆಗೆ ಅಣೆಕಟ್ಟುಗಳನ್ನು ಕಟ್ಟಲಾಗಿದೆ.
ಮಳೆಗಾಲದಲ್ಲಿ ನಂದಿನೀಯ ಅಬ್ಬರ ಸೋಡುವುದಕ್ಕೇ ಸೊಬಗು. ನೂರಾರು ರೈತರ ಬಾಳು ಬಂಗಾರವಾಗಲು ನಂದಿನಿಯ ಕೊಡುಗೆ ಅಪಾರ.
ಕಟೀಲಿನಲ್ಲಿ ನಂದಿನಿಯಲ್ಲಿ ಮಿಂದರೆ ತೀರ್ಥ ಸ್ನಾನಗೈದಂತೆ.

Tuesday, June 9, 2009

ರಕ್ತೇಶ್ವರೀ ಕಲ್ಲು


ಇದು ಕಟೀಲಿನಲ್ಲಿರುವ ರಕ್ತೇಶ್ವರೀ ಬಂಡೆ ಕಲ್ಲು.

ದುಂಬಿಯ ರೂಪ ತಾಳಿದ ದುರ್ಗೆ ಈ ಕಲ್ಲಿನಲ್ಲಿ ಅಡಗಿ ಕುಳಿತಾಗ ಅರುಣಾಸುರ ಖಡ್ಗದಿಂದ ಬಡಿದ. ಆಗ ಆಕೆ ಆತನನ್ನು ಕೊಂದಳಂತೆ. ಅರುಣಾಸುರನನ್ನು ದುಂಬಿಯಾಗಿ ಬಂದು ಕೊಂದು ಭ್ರಾಮರಿಯೆನಿಸಿದ ದುರ್ಗಾಪರಮೇಶ್ವರೀಗೆ ಯಕ್ಷಗಾನ ಅತಿಪ್ರಿಯವಂತೆ.

ಆಕೆ ಇದೇ ಕಲ್ಲಿನಲ್ಲಿ ಕೂತು ಯಕ್ಷಗಾನ ನೋಡುತ್ತಾಳೆ ಎಂಬುದು ಪ್ರತೀತಿ.

Monday, June 8, 2009

ಕಟೀಲು ಕ್ಷೇತ್ರ


ಕಾರ್ಣಿಕ ಕಟೀಲು ಕ್ಷೇತ್ರ.

ನಂಬಿದವರಿಗೆ ಇಂಬು ಕೊಡುವ, ಇಷ್ಟಾರ್ಥ ಸಿದ್ಧಿಸುವಂತೆ ಮಾಡುವ, ಕಷ್ಟ ಪರಿಹರಿಸುವ ಕಟೀಲಿನ ಭ್ರಾಮರಿ ಕ್ಷೇತ್ರದ ಕುರಿತಾದ ಹೊಸ ಬ್ಲಾಗ್ ಇದು.